ನಾಳೆ ರಿಲೀಸ್ ಗೆ ರೆಡಿ ಆಗಿದೆ ಭೈರತಿ ರಣಗಲ್. ಬೇಗ ಗುಣಮುಖರಾಗಿ ಎಂದ ಅಭಿಮಾನಿಗಳು

 

ಭೈರತಿ ರಣಗಲ್ ಸಾರಾಂಶ

ಚಿತ್ರದಲ್ಲಿ ಡಾ. ಶಿವ ರಾಜ್‌ಕುಮಾರ್ ಮತ್ತು ರುಕ್ಮಿಣಿ ವಸಂತ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ, ಜೊತೆಗೆ ಛಾಯಾ ಸಿಂಗ್, ವಸಿಶ ಸಿಂಹ, ರಾಹುಲ್ ಬೋಸ್, ಶಬೀರ್ ಕಲ್ಲರಕ್ಕಲ್, ಅವಿನಾಶ್, ದೇವರಾಜ್ ಮತ್ತು ಅನೇಕರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದು, ನವೀನ್‌ಕುಮಾರ್‌ ಛಾಯಾಗ್ರಹಣ ಮಾಡಿದ್ದು, ಆಕಾಶ್‌ ಹಿರೇಮಠ ಸಂಕಲನವಿದೆ.

ಗೀತಾ ಪ್ರೊಡಕ್ಷನ್ ನಲ್ಲಿ ಮೂಡಿಬಂದಿರುವ ಈ ಚಿತ್ರ ನವೆಂಬರ್ 15 ರಂದು ಬಿಡುಗಡೆಗೆ ಸಜ್ಜಗಿದೆ. ಮೊದಲೇ ಹೇಳಿರುವಂತೆ ಮಫ್ತಿ ಚಿತ್ರದ ಹಿಂದಿನ ಭಾಗದ ಇನ್ನೆಲೆಯನ್ನು ಹೊತ್ತುತರುತ್ತಿದೆ. ಶಿವರಾಜಕುಮಾರ್ ಅಭಿಮಾನಿಗಳು ನಾಳೆ ಚಿತ್ರ ನೋಡಲು ಕಾತುರದಿಂದ ಕಾಯುತ್ತಿದ್ದಾರೆ,

ಕಾಡುತ್ತಿದೆ ಆರೋಗ್ಯ ಸಮಸ್ಯೆ



ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಸ್ವಲ್ಪ ಮಟ್ಟದ ಏರುಪೇರು ಇದ್ದು ಟಿವಿ ಸಂದರ್ಶನದಲ್ಲಿ ಸ್ವತಃ ತಾವೇ ಬಹಿರಂಗ ಪಡಿಸಿದ್ದಾರೆ. ಈಗಾಗಲೇ ಚಿಕಿತ್ಸೆ ಪಡಿಯುತ್ತಿದ್ದು ಮುಂಬರುವ ದಿನಗಳಲ್ಲಿ ಅಮೇರಿಕಾ ದಲ್ಲಿ ಸರ್ಜರಿ ಗೆ ಹೋಗುವುದಾಗಿ ತಿಳಿಸಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಟ ಬೇಗ ಗುಣಮುಖರಾಗಿ ಬರಲಿ ಎಂದು ಕೇಳಿಕೊಳ್ಳೋಣ,



Published by

Twelvenewz.com

Prashanth h v

Comments

Popular posts from this blog

ಶುಂಠಿ ಬೆಳೆ ಬೆಳೆಯುವ ವಿಧಾನ ಮತ್ತು ಅನುಸರಿಸಬೇಕಾದ ಕ್ರಮಗಳು

Google pay. phone pay. Paytm ಮತ್ತು UPI ಮೂಲಕ ಹಣವರ್ಗಾವಣೆ ಮಾಡುವವರಿಗೂ ಬರಲಿದೆ income tax ನೋಟೀಸ್